ಜಿ ಎಲ್ ಕೆ ಫ಼ಿಲಂಸ್ ಲಾಂಛನದಲ್ಲಿ ರವಿಕಮಲ್ ಹಾಗೂ ಶ್ರೀಧರ್ ನಿರ್ಮಿಸುತ್ತಿರುವ ರಾಧ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ಐದು ಹಾಡುಗಳ ಹಾಗೂ ಒಂದು ಭರ್ಜರಿ ಸಾಹಸ ಸನ್ನಿವೇಶದ ಚಿತ್ರೀಕರಣ ಬಾಕಿಯಿದೆ.
ಚಿತ್ರದ ಪ್ರಮುಖ ಆಕರ್ಷಣೆಗಳಲ್ಲೊಂದಾಗಿರುವ ಈ ಸಾಹಸ ಸನ್ನಿವೇಶದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ವಿಶೇಷ ಸೆಟ್ ನಿರ್ಮಾಣವಾಗುತ್ತಿದೆ. ಹಾಡುಗಳ ಚಿತ್ರೀಕರಣಕ್ಕೆ ಈ ತಿಂಗಳ ಅಂತ್ಯದಲ್ಲಿ ಚಾಲನೆ ದೊರಕಲಿದ್ದು, ಶ್ರೀಕಂಠೀರವ ಸ್ಟುಡಿಯೋ, ನಗರದ ರಸ್ತೆಗಳು ಹಾಗೂ ನಂದಿಗ್ರಾಮದಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ನಿರ್ದೇಶಕ ಹರಿಕಿರಣ್ ತಿಳಿಸಿದ್ದಾರೆ.
ರವಿಅಲಾರ ಸಂಗೀತವಿರುವ ಈ ಚಿತ್ರಕ್ಕೆ ಸತ್ಯಬಾಬು ಅವರ ಛಾಯಾಗ್ರಹಣವಿದೆ, ಬಾಬು ಸಂಕಲನ, ಮುರಳಿ ಸಂಭಾಷಣೆ ಹಾಗೂ ಡಿಫ಼ರೆಂಟ್ಡ್ಯಾನಿ ಸಾಹಸವಿರುವ ಚಿತ್ರದ ತಾರಾಬಳಗದಲ್ಲಿ ವಿಜಯರಾಘವೇಂದ್ರ, ಶೇಖರ್, ಮಧುವಿಕಾ, ವಿಜಯರಂಗರಾಜು, ನಟರಾಜ್, ಎಂ.ಎಸ್.ನಾರಾಯಣ್, ಜಯಪ್ರಕಾಶ್ರೆಡ್ಡಿ, ಭವ್ಯ, ಸವಿತಾಕೃಷ್ಣಮೂರ್ತಿ ನಕುಲ್ಬಾಲಚಂದರ್, ಸುನೀಲ್ ಬೀರೂರ್ ಮುಂತಾದವರಿದ್ದಾರೆ.